ಎಂದಾದರೊಂದು ದಿನ

ಎಂದಾದರೊಂದು ದಿನ
ಬರುವೆ ಏನೆ ಕೇಳಲೇ
ಬಾಗಿಲ ತೆರೆದು ಬೆಳಕನ್ನು ನೀಡಿ
ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ ||

ಹೊಸಿಲ ಮೆಟ್ಟಿ ಬರಲು ನನ್ನರಸಿಯೆ
ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ
ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ
ಹೊಂಗಿರಣವು ನಾಚಿ ಬಾಗಿರಲು ಧರೆಗೆ
ನೆನಪಾಗಿ ಪ್ರತಿಕ್ಷಣ ತುಡಿಯುವುದು ಸರಿಯೇನೆ || ಎ ||

ಭಾವವೂ ನೀನು ಅನುರಾಗವೂ ನೀನು
ಬಿದಿಗೆ ಚಂದ್ರತಾರ ಹೂನಗೆಯು ನೀನು
ಎನ್ನ ಜೀವಕೆ ಚೈತನ್ಯ ತುಂಬಿ
ಭಾವದೊಲುಮೆ ಸೋಪಾನದಲಿ ವಿರಮಿಸಿ
ಶೃತಿಯ ಮೀಟಿ ಮನವಾ ಕಾಡುವುದು ಸರಿಯೇನೆ || ಎ ||

ಕಲ್ಪನೆಯೂ ಕನಸೋ ನಾನರಿಯೇ
ನನಸಾಗುವುದೆಂತೋ ಕಾದಿರುಳ ಹಾದಿಯಲಿ
ಮಲ್ಲಿಗೆ ಹೂಹಾಸಿ ಬಾಗಿಲಲಿ ಕಾದಿಹೆ
ಕಾಮಿನಿ ಭಾಮಿನಿ ಎನ್ನ ಮನದರಸಿಯೆ
ನಿನ್ನ ಬರುವಿಕೆಯ ಸಡಗರದೆ ಮರೆತೆ ನಾ ನನ್ನನೇ
ಎಂದು ಬರುವೆ ಹೇಳಲೇ || ಎ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋರು-ಬೀರು
Next post ಬಾಲ ಗೋಪಾಲ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys